ಬಸವಣ್ಣಾ ಉಘೇ ಉಘೇ (ಪ್ರಹಸನ -73)
ಪ್ರಹಸನ -73 ಬಸವಣ್ಣಾ ಉಘೇ ಉಘೇ.. ----------------------------- ಒಬ್ಬ : ಕರುನಾಡಿನ ಸಾಂಸ್ಕೃತಿಕ ನಾಯಕನಿಗೆ ಎಲ್ಲರೂ : ಜೈ. ಇನ್ನೊಬ್ಬ : ಸಿಎಂ ಸಿದ್ದರಾಮಯ್ಯನವರಿಗೆ ಎಲ್ಲರೂ : ಜೈ ಮತ್ತೊಬ್ಬ : ವೀರಶೈವ ಮಹಾಸಭೆಗೆ ಒಬ್ಬ : ಡಬಲ್ ಜೈ.. ಇನ್ನೊಬ್ಬ : ಲಿಂಗಾಯತ ಮಠದ ಮಾಸ್ವಾಮಿಗಳಿಗೆ ಒಬ್ಬ : ತ್ರಿಬಲ್ ಜೈ. ಮೇಷ್ಟ್ರು : ಹೋಲ್ಡಾನ್ ಹೋಲ್ಡಾನ್. ಏನಿದು ಜೈಕಾರದ ಮೆರವಣಿಗೆ. ಒಬ್ಬ : ಅಷ್ಟೂ ಗೊತ್ತಾಗೋದಿಲ್ವೇನ್ರಿ ಮೇಷ್ಟ್ರೇ. ನಮ್ಮ ಬಸವಣ್ಣನವರನ್ನು ಸಿದ್ದರಾಮಣ್ಣನವರು ಸಾಂಸ್ಕೃತಿಕ ನಾಯಕ ಅಂತಾ ಘೋಷಣೆ ಮಾಡಿದ್ದಾರೆ. ಅದಕ್ಕೇ ಈ ಸಂಭ್ರಮಾಚರಣೆ. ಇನ್ನೊಬ್ಬ : ಬಸವಣ್ಣ ನಮ್ಮ ನಾಯಕ, ಸಾಂಸ್ಕೃತಿಕ ನಾಯಕ, ಮತ್ತೊಬ್ಬ : ಜೈಕಾರ ಹಾಕೋದು ನಮ್ಮ ಕಾಯಕ. ಮೇಷ್ಟ್ರು : ಆಯ್ತ್ರಪ್ಪಾ ಆಮೇಲೆ ಜೈಕಾರ ಹಾಕೋರಂತೆ. ಮೊದಲು ನನ್ನ ಪ್ರಶ್ನೆಗೆ ಉತ್ತರಾ ಕೊಡಿ. ಒಬ್ಬ : ಥೋ ಈ ಮೇಷ್ಟ್ರಗಳು ಎಲ್ಲಿದ್ರೂ ಪ್ರಶ್ನೆ ಕೇಳೋದೆ ಕೆಲಸಾ. ( ನಾಟಕೀಯವಾಗಿ ಕೈಕಟ್ಟಿಕೊಂಡು ನಿಂತು) ಕೇಳಿ ಗುರುಗಳೇ.. ಮೇಷ್ಟ್ರು : ಅಲ್ರಪ್ಪಾ ಬಸವಣ್ಣ ಬರೀ ನಾಯಕ ಅಲ್ಲಾ ಲಿಂಗಾಯತ ಧರ್ಮದ ಸ್ಥಾಪಕ ಕಣ್ರಯ್ಯಾ. ಇನ್ನೊಬ್ಬ : ಯಾಕೆ ಮೇಷ್ಟ್ರೇ ಧರ್ಮ ಸ್ಥಾಪಕರು ನಾಯಕರಾಗಬಾರದಾ? ಮೇಷ್ಟ್ರು : ಬುದ್ದ ಧರ್ಮಸ್ಥಾಪಕನೋ ಇಲ್ಲಾ ನಾಯಕನೋ. ಮತ್ತೊಬ್ಬ : ಬೌದ್ಧ ಧರ್ಮ ಸ್ಥಾಪನೆ ಮಾಡಿದ್ದು ಬುದ್ದನೇ ಅಲ್ವಾ ಮೇಷ್ಟ್ರೆ. ಮೇಷ್ಟ್ರು : ಗುರುನಾನಕ್ ರವರು.. ಇನ್ನೊಬ್ಬ ...