Posts

Showing posts from February, 2024

ಸಿಂಹಗಳ ಪಜೀತಿ ( ಪ್ರಹಸನ)

Image
ಪ್ರಹಸನ - 76 ಸಿಂಹಗಳ ಪಜೀತಿ (ಝೂನಲ್ಲಿ ಒಂದು  ಗಂಡು ಸಿಂಹವನ್ನು ಇನ್ನೊಂದರಲ್ಲಿ ಹೆಣ್ಣು ಸಿಂಹವನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ. ಕೋಣೆಯ ಹೊರಗೆ ನರಿಯೊಂದು ಬಂದು ನಿಂತು) ನರಿ : ಏನು ಕಾಡಿನ ರಾಜರು ಹೇಗಿದ್ದೀರಿ? ಸಿಂಹ : ( ಕೆಕ್ಕರಿಸಿ ನೋಡುತ್ತಾ) ಕಾಡಲ್ಲಿ ರಾಜನಾಗಿದ್ದೆ. ಈಗ ಈ ಕೋಣೆಯಲ್ಲಿ ಬಂಧಿಯಾಗಿರುವೆ. ಕಾಣ್ತಾ ಇಲ್ವಾ. ನರಿ : ಹೋಗಲಿ ನಮ್ಮ ಸಿಂಹಿನಿಯವರು ಹೇಗಿದ್ದಾರೆ?  ಸಿಂಹಿನಿ : (ಗುರಾಯಿಸುತ್ತಾ) ಏಯ್ ಅನಿಷ್ಟವೇ. ನಾವಿಬ್ಬರೂ ಬಂಧನದಲ್ಲಿದ್ದರು ಒಂದೇ ಕೋಣೆಯಲ್ಲಿ ಆನಂದಬಾಗಿದ್ದೆವು. ನಮ್ಮನ್ಯಾಕೆ ಬೇರೆ ಬೇರೆ ಮಾಡಿದ್ದಾರೆ ಅದನ್ನು ಬೊಗಳು ಮೊದಲು. ನರಿ : ಅಯ್ಯೋ ಅದೇನು ಅಂತಾ ಹೇಳಲಿ. ಎಲ್ಲಾ ಹೆಸರಿನ ಮಹಿಮೆ. ಈಗ ನಿಮ್ಮ ಹೆಸರು ಏನು ಹೇಳಿ ರಾಜರೇ? ಸಿಂಹ : ನಾನು ಕಾಡಿನ ರಾಜನಾಗಿದ್ದ ಸಿಂಹ. ನರಿ : (ಪಕಪಕನೇ ನಕ್ಕು) ನೋ.. ನಿಮ್ಮ ಹೆಸರು ಸಿಂಹ ಅಲ್ಲಾ. ಅಕ್ಬರ್.. ಅಂತಾ.  ಸಿಂಹ : ಯಾರಯ್ಯಾ ಅದು ನನ್ನ ಕೇಳದೇ ನನ್ನ ಹೆಸರು ಬದಲಾಯಿಸಿದವರು. ನರಿ : ಇನ್ಯಾರು.. ಮನುಷ್ಯರು. ನಿಮ್ಮ ಹೆಸರು ಏನು ಅಂತಾ ಗೊತ್ತಾ ಮಹಾರಾಣಿಯವರೇ. ಸಿಂಹಿನಿ : ನನ್ನ ಹೆಸರು ಸಿಂಹಿನಿ. ನರಿ : ( ಮತ್ತೆ ಗಹಗಹಿಸಿ ನಕ್ಕು) ಅಲ್ಲಾ.. ನಿಮ್ಮ ಹೆಸರು ಸೀತಾ..‌ ಅದನ್ನೂ ಮನುಷ್ಯರೇ ನಾಮಕರಣ ಮಾಡಿದ್ದು. ಸಿಂಹ : (ಗರ್ಜಿಸಿ) ಅವರು ಏನಾದರೂ ಕರೆದುಕೊಳ್ಳಲಿ ನಮಗೇನು. ನಾವು ಸಿಂಹ ಅನ್ನುವುದು ಸುಳ್ಳೆನು? ನರಿ : ಹೌದೌದ...

ಮತಾಂಧತೆ ಜೋರು! ಅಪರಾಧಿ ಯಾರು?

Image
ಪ್ರಹಸನ - 75 ಮತಾಂಧತೆ ಜೋರು! ಅಪರಾಧಿ ಯಾರು? ದೃಶ್ಯ 1.  ಮಂಗಳೂರಿನ ಕ್ರಿಶ್ಚಿಯನ್ ಸ್ಕೂಲ್. (7 ನೇ ಕ್ಲಾಸಿನ ವಿದ್ಯಾರ್ಥಿನಿಯರಿಗೆ ಶಿಕ್ಷಕಿಯೊಬ್ಬರು ರವೀಂದ್ರನಾಥ ಟಾಗೂರರ ಕವಿತೆ ಕುರಿತು ಪಾಠ ಮಾಡುತ್ತಿದ್ದಾರೆ) ಟೀಚರ್ : ನೋಡಿ ಮಕ್ಕಳೆ ದೇವರನ್ನು ಕಾಣುವುದು ಹೇಗೆ? ಪೂಜಿಸುವುದು ಹೇಗೆ? ಎಂಬುದನ್ನು ಈ ಕವಿತೆ ಹೇಳುತ್ತದೆ. ಕೇಳಿ. ತೊರೆದು ಬಿಡು ಆ ನಿನ್ನ ಮಂತ್ರಪಠಣಗಳನ್ನು ಸುಮ್ಮನೇ ಕುಳಿತುಕೊಳ್ಳಬೇಡ ದೇವರು ಗುಡಿ ಚರ್ಚು ಮಸೀದಿಗಳಲ್ಲಿಲ್ಲ ಕಣ್ಣನ್ನು ತೆರೆದು ನೋಡು  ಸ್ಟುಡೆಂಟ್ 1: ಮ್ಯಾಮ್.. ಗುಡಿಯಲ್ಲಿಯೇ ನೋ ಗಾಡ್ ಅಂದ್ರೆ ಮತ್ತೆಲ್ಲಿ ಗಾಡ್ ಇರ್ತಾರೆ? ಟೀಚರ್ : ಗುಡ್ ಕ್ವಶ್ಚನ್.  ನೇಗಿಲ ಯೋಗಿಯೊಳಗೆ ಇದ್ದಾನೆ ಕಠಿಣ ಪರಿಶ್ರಮದಲ್ಲಿದ್ದಾನೆ. ಸ್ಟುಡೆಂಟ್ 2 : ಹೋ ಮೈ ಗಾಡ್. ಟೀಚರ್ : ಯಸ್ ಡಿಯರ್ ದೇವರು ಶುದ್ದತೆಯ ಹೆಸರಲ್ಲಿ ಮೈಗೆ ಸ್ನಾನ ಮಾಡುವವರಲ್ಲಿಲ್ಲ ಮೌಢ್ಯ ಮಡಿವಂತಿಕೆಯಲ್ಲಿಲ್ಲ ಮೂಢ ಸಂಪ್ರದಾಯದಲ್ಲಿಲ್ಲ ಇಳಿದು ಬಾ ಈ ದೂಳಿನ ಮಣ್ಣಿಗೆ ಪರಿಶ್ರಮ ಪಟ್ಟು ಕಾಯಕ ಮಾಡಿದರೆ ದೇವರ ಕೃಪೆಗೆ ಪಾತ್ರವಾಗುವೆ.. ಸ್ಟೂಡೆಂಟ್ 1  : ರಿಯಲ್ಲಿ, ಮೈ ಗಾಡ್. ಐ ಕಾಂಟ್ ಬಿಲೀವ್ ದಿಸ್. ಟೀಚರ್ : ನೋ ಕ್ವಶ್ಚನ್ ಆಪ್ ಬಿಲೀವ್. ಇಟ್ಸ ಇನ್ ದಿಸ್ ಪೋಯೆಮ್. ದೃಶ್ಯ 2 :  ಮನೆ ಮದರು : ಬಂದ್ಯಾ ಬಾ. ಕೈಕಾಲು ಮುಖ ತೊಳೆದುಕೊಂಡು ಬೇಗ ಬಾ. ದೇವಸ್ಥಾನಕ್ಕೆ ಹೋಗಿ ಬರೋಣ. ಡಾಟರು : ನೋ ಮಮ್ಮಿ. ಟೀಚ...

ಭಾರತರತ್ನ

Image
ಪ್ರಹಸನ - 74 ಭಾರತರತ್ನ (ಕಾಲೇಜೊಂದರ ತರಗತಿ. ಶಿಕ್ಷಕಿ ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತಿದ್ದಾರೆ) ಮೇಡಂ : ಏ ಬಸು.. ದೊಡ್ಡವನಾದ ಮೇಲೆ ನೀ ಏನಾಗಬೇಕಂತ ಮಾಡಿದ್ದೀ. ಬಸ್ಯಾ : ನಾನಾ ಮೇಡಂ. ನಾನೂ ನಾನು ಬಸ್ ಕಂಡಕ್ಟರ್ ಆಗಬೇಕಂತಾ.. ನಂದೊಂದು ಇದು ಐತೆ.. ಮೇಡಂ : ಯಾಕೋ.. ಓದಿ ಕಲೆಕ್ಟರ್ ಆಗೋದು ಬಿಟ್ಟು ಇದೇನಿದು ಕಂಡಕ್ಟರ್ರು.. ಬಸ್ಯಾ : ಹೌದು ಮೇಡಂ. ರೊಕ್ಕಾ.. ಜಣಜಣ ರೊಕ್ಕಾ ದಿನಾಲೂ ಎಣಿಸಬೋದು. ಟಿಕೇಟ್ ಕೊಡೋದು ರೊಕ್ಕಾ ಇಸ್ಕೊಳ್ಳೋದು..  ಮೇಡಂ : ಹೋಗಲಿ ಬಿಡು. ಏ ಇವ್ನೆ.. ಸೋಮಾ.. ಸೋಮಣ್ಣಾ.. ನೀನೇನಾಗಬೇಕಂತೀ.. ಸೋಮ : ನಾನಾ ಮೇಡಂ. ನಾನು ನಾನೂ ಭಾರತರತ್ನ ಆಗಬೇಕು ಅಂತಾ ಅನ್ಕೊಂಡಿರುವೆ ಮೇಡಂ. ಮೇಡಂ : (ಶಾಕ್ ಒಳಗಾಗಿ) ಭಾರತರತ್ನಾನಾ. ಅದು ಪ್ರಶಸ್ತಿ ಕಣಯ್ಯಾ ಕೆಲಸ ವೃತ್ತಿ ಅಲ್ಲಾ.  ಸೋಮ : ಏನಾದ್ರೂ ಇರ್ಲಿ ಮೇಡಮ್ಮು. ಭಾರತರತ್ನ ತಗೊಳ್ಳಲೇ ಬೇಕು. ದೇಶದ ಜನ ನನ್ನ ಕೊಂಡಾಡಲೇಬೇಕು. ಮೇಡಂ : ಶಹಬ್ಬಾಸ್ ಸೋಮು. ಮಹತ್ವಾಂಕಾಕ್ಷೆ ಅಂದ್ರೆ ಹಿಂಗಿರಬೇಕು. ಭಾರತರತ್ನ ತಗೊಳ್ಳೋಕೆ ಏನು ಮಾಡಬೇಕಂತಾ ಮಾಡಿದ್ದೀ.. ಸೋಮ : ಅದು ಬಹಳಾ ಸುಲಭ ಮೇಡಮ್ಮು. ಒಂದಿಷ್ಟು ಜನಗಳನ್ನ ಸೇರಿಸಬೇಕು. ಮಸೀದಿ ಕೆಳಗೆ ದೇವಸ್ಥಾನ ಇದೆ ಅಂತಾ ತಲಿ ಕೆಡಿಸ್ಬೇಕು. ಮುಸ್ಲಿಮರ ವಿರುದ್ದ ಹಿಂದೂಗಳನ್ನ ಎತ್ತಿ ಕಟ್ಟಬೇಕು. ಮತಾಂಧತೆ ಹುಟ್ಟು ಹಾಕಬೇಕು. ಮೇಡಂ : ಆಮೇಲೆ.. ಸೋಮ :  ದೇವಜನ್ಮಭೂಮಿ ರಥ ಯಾತ್ರೆ ಮಾಡಬೇಕು. ...